ತೆಲುಗು, ಮರಾಠಿ, ತಮಿಳು ಮತ್ತಿತರ ಭಾಷೆಗಳಸೊಗಡನ್ನು ನಮ್ಮ ಸಾಹಿತಿಗಳು ಕನ್ನಡಕ್ಕೆ ತಂದಿದ್ದು ಮತ್ತು ಕನ್ನಡದಿಂದ ಆ ಭಾಷೆಗಳಿಗೆ ಕೊಟ್ಟಿದ್ದನ್ನು ನಾವಿಲ್ಲಿ ಸ್ಮರಿಸಬೇಕು. ಇಷ್ಟಾಗಿಯೂ ಬೇರೆ ಭಾಷೆಯ ಪುಸ್ತಕಗಳಿಗೆ ಅವಕಾಶವಿಲ್ಲ ಎನ್ನುವುದು ಎಷ್ಟು ಸರಿ? ಅಧ್ಯಕ್ಷರು ತಮ್ಮ ಹೇಳಿಕೆಯನ್ನು ಬದಲಿಸಿ, ‘ಕನ್ನಡ ಜಾತ್ರೆಗೆ ಬರುವ ಕನ್ನಡ ಸಹೃದಯರೇ, ನಿಮಗೊಂದು ಮತ್ತು ನಿಮ್ಮವರಿಗೊಂದು ಕನ್ನಡ ಪುಸ್ತಕವನ್ನು ಕೊಂಡುಕೊಳ್ಳಿ’ ಎಂದು ಹೇಳಿದ್ದರೆ ಅರ್ಥಪೂರ್ಣವಾಗುತ್ತಿತ್ತೇನೊ?
-ಎಚ್.ವಿ.ಪ್ರಕಾಶ್,ರಟ್ಟೀಹಳ್ಳಿ