ಸೋತಿದ್ದರೆ... ಹಾವು ಮುಂಗುಸಿಯಂತಿರುವ ವಿರೋಧಿಗಳು ಅಧಿಕಾರಕ್ಕಾಗಿ ಒಂದಾಗುವುದನ್ನು ನೋಡುತ್ತಾ, ಮತ್ತೊಮ್ಮೆ ಇದ್ದೂ ಇಲ್ಲದಂತೆ ಇರಬೇಕಿತ್ತು. ಉಪಚುನಾವಣೆ ಮುಂದಕ್ಕೆ ಹೋಗಿರುವುದರಿಂದ ಸದ್ಯದ ಮಟ್ಟಿಗೆ ಬಿಜೆಪಿಗೆ ಬಾಧಕ ಇಲ್ಲ. ಈಗ ಮಹಾರಾಷ್ಟ್ರ, ಹರಿಯಾಣ ವಿಧಾನಸಭಾ ಚುನಾವಣೆಗಳಲ್ಲಿ ಮತ್ತೆ ‘ಮೋದಿ ಮೋಡಿ’ ಕೆಲಸ ಮಾಡಿದರೆ, ಇಲ್ಲಿಯೂ ಮಧ್ಯಂತರ ಚುನಾವಣೆಗೆ ಮುಂದಾಗಿ ಬಿಜೆಪಿ ನೇತೃತ್ವದಲ್ಲಿ ಶಕ್ತಿಯುತ ಸರ್ಕಾರವನ್ನು ಸ್ಥಾಪಿಸುವ ಅವಕಾಶ ದೊರಕುತ್ತದೆ. ಅಂತೂ ಉಪಚುನಾವಣೆ ಮುಂದೂಡಿಕೆ ಬಿಜೆಪಿಗೆ ವರವಾಗಿದೆ ಎನ್ನಬಹುದು. ಇದಕ್ಕೇ ಅದೃಷ್ಟ ಎನ್ನುವುದು. ಜೆಡಿಎಸ್ ಕೇವಲ 37 ಸ್ಥಾನಗಳನ್ನು ಗಳಿಸಿದ್ದರೂ ಮುಖ್ಯಮಂತ್ರಿಯಾದ ಎಚ್.ಡಿ.ಕುಮಾರಸ್ವಾಮಿ ಅವರ ಅದೃಷ್ಟದಂತೆ!