ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ ‌| ಏನಾಗಿದೆ ನಮ್ಮ ನಾಯಕರಿಗೆ? ಎಲ್ಲಿ ಹೋಯಿತು ನಮ್ಮತನ?

Last Updated 6 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಪ್ರವಾಹದಿಂದ ಬೀದಿಗೆ ಬಿದ್ದ ಉತ್ತರ ಕರ್ನಾಟಕ ಭಾಗದ ಜನರು, ಬದುಕನ್ನು ಮತ್ತೆ ಕಟ್ಟಿಕೊಳ್ಳುವ ಧಾವಂತದಲ್ಲಿದ್ದಾರೆ. ಆಶ್ರಯಕ್ಕೆ ಅನುವು ಮಾಡಿಕೊಳ್ಳುವುದಕ್ಕೇ ಒಂದಷ್ಟು ದಿನಗಳು ವ್ಯಯವಾಗಿವೆ. ಇಲ್ಲಿನ ಗ್ರಾಮ ವಾಸಿಗಳನ್ನು ನೋಡಿದರೆ ಮನ ಕಲಕುತ್ತದೆ. ಇಂತಹ ಕಷ್ಟದ ಪರಿಸ್ಥಿಯಲ್ಲೂ ಕರ್ನಾಟಕದ ಮುಂದಾಳುಗಳು, ತಮ್ಮತಮ್ಮಲ್ಲೇ ಜಗಳ ಮಾಡಿಕೊಂಡು ಕುರ್ಚಿಗಾಗಿ ಕಿತ್ತಾಡಿದ್ದನ್ನು ನೆನೆಸಿಕೊಂಡರೆ, ಎಂತಹ ಸ್ಥಿತಿಗೆ ನಾವು ಕರ್ನಾಟಕವನ್ನು ದೂಡಿದ್ದೇವೆ ಎನಿಸುತ್ತದೆ. ಯಾವುದೇ ಟಿ.ವಿ. ಚಾನೆಲ್‌ ತಿರುಗಿಸಿದರೂ ಕಾಣುವುದು, ಅಧಿಕಾರಕ್ಕಾಗಿ ಅಬ್ಬರಿಸುವ ಧ್ವನಿಗಳು. ಎಲ್ಲಿದೆ ಕರ್ನಾಟಕದ ಹಿರಿಮೆ? ಏನಾಗಿದೆ ನಮ್ಮ ನಾಯಕರಿಗೆ? ಎಲ್ಲಿ ಹೋಯಿತು ನಮ್ಮತನ?

–ಗಂಗಾ ಎಸ್‌. ಕೋರಿ,ಸಂಗೂರ, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT