ಕಾದಿದ್ದು ಸಾಕು. ಇನ್ನಾದರೂ ಮಂತ್ರಿಮಂಡಲ ರಚಿಸಿ ಜನರ ನಿರೀಕ್ಷೆಗಳಿಗೆ ಸ್ಪಂದಿಸಲಿ. ಮಳೆಯ ಆರ್ಭಟದಿಂದ ರಾಜ್ಯ ತತ್ತರಿಸುತ್ತಿದೆ. ಗಂಜಿ ಕೇಂದ್ರ, ನಿರಾಶ್ರಿತರಿಗೆ ವಸತಿ ವ್ಯವಸ್ಥೆ, ಅವರ ಆರೋಗ್ಯದ ಕಾಳಜಿ, ಜಾನುವಾರಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಹೆಚ್ಚು ನಿಗಾ ವಹಿಸಲಿ. ಇನ್ನು ವಿರೋಧ ಪಕ್ಷಗಳಂತೂ ನಮಗೆ ಸಂಬಂಧವೇ ಇಲ್ಲವೆಂಬಂತೆ ಕುಳಿತಿವೆ. ಹೀಗಾದರೆ ಸಾಮಾನ್ಯ ಜನರ ಕುಂದುಕೊರತೆಗಳ ಬಗ್ಗೆ ತಲೆಕೆಡಿಸಿಕೊಳ್ಳುವವರು ಯಾರು?