ಇದು ನಿಜವೇ ಆಗಿದ್ದರೆ ಆಶ್ಚರ್ಯಕರ. ಸರ್ಕಾರದ ಜವಾಬ್ದಾರಿಗಳು, ಖಾತೆಗಳು ರಾಜ್ಯದ ಜನರ ಒಳಿತಿಗಾಗಿ ಇರುತ್ತವೇ ಹೊರತು ಸ್ವಹಿತಾಸಕ್ತಿಗೆ ಬಳಸಿಕೊಳ್ಳಲು ಅಲ್ಲ. ಖಾತೆಗಳನ್ನು ಬಸ್ಸಿನಲ್ಲಿ ಸೀಟು ಹಿಡಿಯಲು ಹಾಕುವ ಕರವಸ್ತ್ರದಂತೆ ಬಳಕೆ ಮಾಡಿಕೊಳ್ಳದೆ, ಜನರ ಶ್ರೇಯೋಭಿವೃದ್ಧಿಗೆ ಪೂರಕವಾಗುವಂತೆ ನೋಡಿಕೊಳ್ಳಬೇಕು. ಅಧಿಕಾರವನ್ನು ದಕ್ಷತೆ, ಜ್ಞಾನ ಮತ್ತು ಅನುಭವದ ಆಧಾರದ ಮೇಲೆ ಹಂಚಿಕೆ ಮಾಡಬೇಕು.