ರಾಜ್ಯ ಸಾರಿಗೆ ಸಚಿವ ಶ್ರೀರಾಮುಲು ಅವರು ‘ನಮ್ಮ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲ. ಈಗ ಅದಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕಲಾಗಿದೆ’ ಎಂದು ಹೇಳಿದ್ದಾರೆ (ಪ್ರ.ವಾ., ಮಾರ್ಚ್ 14). ಇದು ನೂರಕ್ಕೆ ಸಾವಿರದಷ್ಟು ಪಾಲು ಸುಳ್ಳು. ಸಚಿವರು ತಮ್ಮ ಇಲಾಖೆಯ ಯಾರೋ ಅಧಿಕಾರಿ ನೀಡಿದ ಮಾಹಿತಿಯೇ ನಿಜವೆಂದು ನಂಬಿ ಪ್ರತಿಕ್ರಿಯಿಸಿದ್ದಾರೆ. ಆರ್ಟಿಒ ಕಚೇರಿಯ ಬಗೆಗಿನ ವಿಶೇಷ ವರದಿಯು (ಪ್ರ.ವಾ., ಮಾರ್ಚ್ 14) ಸಂಪೂರ್ಣ ವಾಸ್ತವ ಹಾಗೂ ವಸ್ತುನಿಷ್ಠವಾಗಿದೆ.