ಒಂದು ವರ್ಷಕ್ಕೆ ಮೊದಲು ಕೋಲಾರ ಜಿಲ್ಲೆಯ ಕೆರೆಗಳೆಲ್ಲ ನೀರಿಲ್ಲದೆ ಭಣಗುಡುತ್ತಿದ್ದಾಗ, ‘ನೀರಿಲ್ಲದ ನಾಡಿನಲ್ಲೇಕೆ ಕೆರೆಗಳು’ ಎಂಬ ಉಪೇಕ್ಷೆಯ ಮಾತುಗಳನ್ನಾಡುತ್ತಿದ್ದ ಸಂದರ್ಭದಲ್ಲಿ, ಕೋಲಾರಮ್ಮನ ಕೆರೆಯನ್ನು ಉಳಿಸುವ ದಿಸೆಯಲ್ಲಿ ಮಾನವ ಸರಪಳಿಯನ್ನು ನಿರ್ಮಾಣ ಮಾಡಿ ಜಾಗೃತಿ ಮೂಡಿಸಲಾಯಿತು. ಈ ವರ್ಷ ಕೋಲಾರಮ್ಮನ ಕೆರೆ ತುಂಬಿ ಕೃಷಿಗೆ ನೀರುಣಿಸುತ್ತಿದೆ. ನೀರು ಜೀವಜಲವೇ ವಿನಾ ಮೃತ್ಯುವಲ್ಲ ಎಂಬುದನ್ನು ಮನಗಾಣಲಿ. ಈಗಲಾದರೂ ಜನರು ಮತ್ತು ಸರ್ಕಾರ ಎಚ್ಚೆತ್ತುಕೊಳ್ಳಲಿ. ನೀರ ಹರಿವಿನ ರಾಜಕಾಲುವೆ, ತೊರೆಗಳ ಒತ್ತುವರಿ ತೆರವಾಗಲಿ. ನಕಾಶೆಯಲ್ಲಿ ಇರುವಂತೆ, ಒತ್ತುವರಿಯಾದ ಕೆರೆಯ ಸ್ಥಳವು ನೀರಿಗಿರಲಿ, ಕೋಡಿಗಳು ದುರಸ್ತಿಯಾಗಲಿ. ನೀರನ್ನು ಕುರಿತ ನಮ್ಮ ಹಿಂದಿನವರ ತಿಳಿವಳಿಕೆ ನಮ್ಮದಾಗಲಿ.