ಈಗ ನಮ್ಮ ವಿಧಾನಸಭಾಧ್ಯಕ್ಷರು ಮೂಲತಃ ಕಾಂಗ್ರೆಸ್ ಮುಖಂಡ. ಪಕ್ಷದ ನೆರವಿನಿಂದಲೇ ಸಭಾಧ್ಯಕ್ಷ ಸ್ಥಾನ ಪಡೆದವರು. ಯಾವುದೇ ಕ್ಷಣದಲ್ಲಿ ಮುಖ್ಯಮಂತ್ರಿ ಇಷ್ಟಪಟ್ಟರೆ, ಸಭಾಧ್ಯಕ್ಷ ಸ್ಥಾನ ತ್ಯಜಿಸಿ ಸಚಿವರಾಗುವ ಸಾಧ್ಯತೆ ಇರುವವರು. ಇವರು ಸಭಾಧ್ಯಕ್ಷರಂತಹ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ ತಕ್ಷಣ ನಿಷ್ಪಕ್ಷಪಾತಿಯಾಗಿ ವರ್ತಿಸುವಂತೆ ಮನಃಪರಿವರ್ತನೆಸಿದ್ಧಿಸುವುದು ಸಾಧ್ಯವೇ? ಈಗಿನ ಕ್ಲಿಷ್ಟ ಸಂದರ್ಭದಲ್ಲಿ, ರಾಜೀನಾಮೆ ಅಂಗೀಕರಿಸುವುದರಿಂದ ಸರ್ಕಾರ ಮಾತ್ರವಲ್ಲ, ತಮ್ಮ ಸ್ಥಾನಕ್ಕೂ ಚ್ಯುತಿ ಬರುವುದರಿಂದ ಸಭಾಧ್ಯಕ್ಷರು ಸ್ಥಿತಪ್ರಜ್ಞರಂತೆ ಪಕ್ಷಾತೀತವಾಗಿರಲು ಸಾಧ್ಯವೇ? ಇಂತಹ ಪ್ರಕರಣದಲ್ಲಿ ಅವರು ತೀರ್ಪುದಾರರಾಗುವುದು ಸಮಂಜಸವೇ?