ಪರಿಷತ್ತಿನ ಅಧ್ಯಕ್ಷ ಸ್ಥಾನ ರಾಜಕೀಯ ವ್ಯವಸ್ಥೆಯದಲ್ಲ. ಅದು ಪೂರ್ಣ ಸಾಹಿತ್ಯ ಮತ್ತು ಸಂಸ್ಕೃತಿ ಸಂರಕ್ಷಣೆ ಮತ್ತು ಸಂವರ್ಧನೆಯ ಸ್ಥಾನ. ಅದಕ್ಕೆ ಮುಖ್ಯವಾಗಿ ಬೇಕಾದದ್ದು ಅವಸರದ ಜನಪ್ರಿಯ ಘೋಷಣೆಗಳಲ್ಲ, ಪರಿಷತ್ತಿನ ನಿಬಂಧನೆಗೆ ಅನುಗುಣವಾಗಿ ಅದರ ಧ್ಯೇಯೋದ್ದೇಶಗಳ ಸಾರ್ಥಕತೆಗೆ ಬೇಕಾದ ಸಮರ್ಪಣಾಭಾವದ ಸೇವೆ. ಪರಿಷತ್ತಿನ ಘನತೆ- ಗೌರವಗಳಿಗೆ ಭಂಗವುಂಟಾಗದಂತೆ ನೋಡಿಕೊಳ್ಳುವ ಎಚ್ಚರ. ಈ ಹಿನ್ನೆಲೆಯಲ್ಲಿ ರಾ.ನಂ.ಚಂದ್ರಶೇಖರ ಅವರ ಅಭಿಮತವನ್ನು ನಾನು ಒಪ್ಪುತ್ತೇನೆ. ರಾಜಕೀಯದಲ್ಲಿ ಏನೇನೋ ಮಾಡುವುದಾಗಿ ಘೋಷಿಸಿ, ಎಷ್ಟೋ ಜನ ಏನೂ ಮಾಡದೇ ಹೋಗಿದ್ದಾರೆ. ಈಗಿನ ಅಧ್ಯಕ್ಷರು ಹಾಗಾಗದಿರಲಿ.