ಇದು ಎಷ್ಟು ಸರಿ? ಅಧ್ಯಕ್ಷರು ಮೇಲಿನ ಮರುನಾಮಕರಣಕ್ಕೆ ಮುಖ್ಯಮಂತ್ರಿ ಅವರಿಗೆ ಸಲಹೆ ಮಾಡಿದ್ದು ಸುಳ್ಳೇ? ಜೊತೆಗೆ 21 ಅಕ್ಷರಗಳನ್ನುಳ್ಳ ಮೈಲುದ್ದದ ಹೆಸರನ್ನು ಯಾರಾದರೂ ಬರೆಯುವುದುಂಟೇ? ಈಗಲೇ ಪಂಪ ಮಹಾಕವಿ ರಸ್ತೆಯ ಹೆಸರು ಪಿ.ಎಂ. ರಸ್ತೆ ಆಗಿದೆ! ರಾಜಾಜಿನಗರದ ಮಹಾಕವಿ ಕುವೆಂಪು ರಸ್ತೆಯು ಎಂ.ಕೆ. ರಸ್ತೆ ಆಗಿದೆ. ಇನ್ನು ನಾಡೋಜ ಪಂಪ ಮಹಾಕವಿ- ಕನ್ನಡ ಸಾಹಿತ್ಯ ಪರಿಷತ್ತು ರಸ್ತೆಯು ಮುಂದೆ ಎನ್.ಪಿ.ಎಂ.ಕೆ. ಎಸ್.ಪಿ ರಸ್ತೆ ಆಗುವುದಿಲ್ಲ ಅನ್ನುವುದಕ್ಕೆ ಯಾವ ಗ್ಯಾರಂಟಿ? ನಿರ್ಣಯದ ಬಗ್ಗೆ ಕಾರ್ಯಕಾರಿ ಸಮಿತಿಯ ಮಾತು ಅಂತಿಮ ಅನ್ನುವುದು ಹಾಸ್ಯಾಸ್ಪದ ಅಲ್ಲವೆ? ಅಲ್ಲಿ ಆಂತರಿಕ ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ ಇದೆಯೇ? ಹೆಸರು ಬದಲಾಯಿಸಲು ಸಲಹೆ ಕೊಟ್ಟ ಮಹಾಶಯರ ಹೆಸರನ್ನು ಮಾಧ್ಯಮಕ್ಕೆ ತಿಳಿಸಿ.