ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಈ ವರ್ಷದಿಂದ ಹೆಚ್ಚುವರಿಯಾಗಿ ಐವರ ಜಯಂತಿ ಆಚರಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಸಂತೋಷ, ಆದರೆ ಕನ್ನಡ ನಾಡಿನಲ್ಲಿ ನಡೆಯುವ ಜಯಂತಿ ಆಚರಣೆಗಳಲ್ಲಿ ಯಾವೊಬ್ಬ ಮಹಿಳೆಯ ಜಯಂತಿ ಆಚರಣೆ ಇಲ್ಲದಿರುವುದು ವಿಷಾದನೀಯ. ಬದಲಾವಣೆಯ ಹರಿಕಾರನಾಗಬೇಕೆಂಬ ಉತ್ಸಾಹದಲ್ಲಿರುವ ಕಸಾಪ ಅಧ್ಯಕ್ಷರಿಗೂ ಕನ್ನಡ ನಾಡು ನುಡಿಗಾಗಿ ದುಡಿದ ಒಬ್ಬ ಸಾಧಕಿಯ ನೆನಪೂ ಆಗಲಿಲ್ಲವೇ?! ಕೇವಲ ಬಾಯಿಮಾತಿನ ಸಮಾನತೆಯಲ್ಲೇ ತೃಪ್ತಿಪಟ್ಟುಕೊಂಡು, ಸಾಧನೆಯ ಶಿಖರವನ್ನೇರಿದ್ದರೂ ಮೂಲೆಗುಂಪಾಗಿರುವ ಮಹಿಳೆಯರಿಗೆ ನ್ಯಾಯ ಸಿಗುವುದಾದರೂ ಯಾವಾಗ?