ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್ಸುಗಳಲ್ಲಿ ಇರಲಿ ಅಂತರ

Last Updated 29 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಇತ್ತೀಚೆಗೆ ಎರಡು ಹಂತಗಳಲ್ಲಿ ನಡೆದ ಗ್ರಾಮ ಪಂಚಾಯಿತಿಯ ಚುನಾವಣೆಯಲ್ಲಿ ಮೂಲ ಸೌಕರ್ಯವಾದ ಸಾರಿಗೆ ಸೌಲಭ್ಯದ ಕೊರತೆ ಎದ್ದು ಕಂಡಿತು. ಮತದಾನ ಮಾಡಲು ರಾಜ್ಯದ ಪ್ರಮುಖ ನಗರ, ಪಟ್ಟಣಗಳಿಂದ ತಮ್ಮ ತಮ್ಮ ಹಳ್ಳಿಗಳಿಗೆ ಹೊರಟ ಮತದಾರರು ಬಸ್ಸುಗಳ ಕೊರತೆಯಿಂದ ಸರಿಯಾದ ಸಮಯಕ್ಕೆ ತಲುಪಲು ಕಷ್ಟಪಡಬೇಕಾಯಿತು. ಇದರಿಂದ ಎಷ್ಟೋ ಮತದಾರರು ಮತದಾನದಿಂದ ವಂಚಿತರಾದ ಉದಾಹರಣೆಗಳೂ ಇವೆ.

ಅಲ್ಲದೆ, ಬಂದ ಕೆಲವೇ ಬಸ್ಸುಗಳಲ್ಲಿ ಆಸನದ ಮಿತಿಯನ್ನು ಮೀರಿ ಜನ ಪ್ರಯಾಣಿಸಿದರು. ಇದನ್ನು ಕಂಡಾಗ, ಕೊರೊನಾ ವೈರಾಣುವಿನ ಎರಡನೇ ಅಲೆ ಹಬ್ಬುತ್ತಿರುವ ಸಂದರ್ಭದಲ್ಲಿ, ಈ ಸಾಂಕ್ರಾಮಿಕ ಇನ್ನಷ್ಟು ಹೆಚ್ಚಾಗಲು ನಾವೇ ಅನುವು ಮಾಡಿಕೊಟ್ಟಂತೆ ಭಾಸವಾಯಿತು. ಮತ್ತೆ ಇಂತಹ ತಪ್ಪು ಮರುಕಳಿಸದಂತೆ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಬೇಕು.

–ನಟರಾಜು ಜಿ. ಶಾಹೂ, ಕೊಳ್ಳೇಗಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT