ಅಲ್ಲದೆ, ಬಂದ ಕೆಲವೇ ಬಸ್ಸುಗಳಲ್ಲಿ ಆಸನದ ಮಿತಿಯನ್ನು ಮೀರಿ ಜನ ಪ್ರಯಾಣಿಸಿದರು. ಇದನ್ನು ಕಂಡಾಗ, ಕೊರೊನಾ ವೈರಾಣುವಿನ ಎರಡನೇ ಅಲೆ ಹಬ್ಬುತ್ತಿರುವ ಸಂದರ್ಭದಲ್ಲಿ, ಈ ಸಾಂಕ್ರಾಮಿಕ ಇನ್ನಷ್ಟು ಹೆಚ್ಚಾಗಲು ನಾವೇ ಅನುವು ಮಾಡಿಕೊಟ್ಟಂತೆ ಭಾಸವಾಯಿತು. ಮತ್ತೆ ಇಂತಹ ತಪ್ಪು ಮರುಕಳಿಸದಂತೆ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಬೇಕು.