ಗುಂಪು ಚರ್ಚೆಗಳು, ಯೋಗ, ಧ್ಯಾನ, ಪ್ರಾರ್ಥನೆ, ಆಧ್ಯಾತ್ಮಿಕ ಚಟುವಟಿಕೆಗಳ ಮೂಲಕ ಅವರಲ್ಲಿ ವಾಸ್ತವದ ಅರಿವು ಮೂಡಿಸಬೇಕು. ‘ಪರಿಸ್ಥಿತಿ ಬದಲಾಗುತ್ತದೆ, ಬದುಕು ಮತ್ತೆ ಸಹಜ ಸ್ಥಿತಿಗೆ ಬರುತ್ತದೆ’ ಎಂಬ ಭರವಸೆಯನ್ನು ಪುನರ್ವಸತಿ ಕೇಂದ್ರಗಳಲ್ಲಿರುವ ಜನರಲ್ಲಿ ಮೂಡಿಸಬೇಕು. ಅದಕ್ಕಾಗಿ ಎಲ್ಲರೂ ಬಿಡುವು ಮಾಡಿಕೊಂಡು, ಪುನರ್ವಸತಿ ಕೇಂದ್ರಗಳಿಗೆ ಒಂದೆರಡು ಬಾರಿಯಾದರೂ ಭೇಟಿ ನೀಡೋಣ.