ಈಗ ನಮ್ಮ ರಾಜ್ಯದ ಕೊಡಗಿನ ಮಹಿಳೆಯರು, ನಾವು ಅವರಿಗೇನೂ ಕಡಿಮೆಯಿಲ್ಲ ಎಂದು ತೋರಿಸಿ ಕೊಟ್ಟಿದ್ದಾರೆ (‘ನೋವ ಮರೆತು ಸ್ವಾವಲಂಬನೆಯತ್ತ ಹೆಜ್ಜೆ’, ಪ್ರ.ವಾ., ನ. 13). ಪ್ರತಿಯೊಂದಕ್ಕೂ ಸರ್ಕಾರವನ್ನು ಅಂಗಲಾಚುವುದಕ್ಕೆ ಬದಲಾಗಿ, ತಾವಾಗಿಯೇ ಮಸಾಲೆ ಪದಾರ್ಥಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿ ‘ಭಲೇ’ ಅನ್ನಿಸಿಕೊಂಡಿದ್ದಾರೆ. ಅಸಹಾಯಕತೆಯಿಂದ ಕೈಕಟ್ಟಿ ಕುಳಿತುಕೊಳ್ಳುವ ಬದಲು, ಇಂಥ ಸಮಾಜಮುಖಿ ಬದುಕು ಕಟ್ಟಿಕೊಳ್ಳುವಲ್ಲಿ ಇವರ ಶ್ರಮ ಶ್ಲಾಘನೀಯ ಹಾಗೂ ಅನುಕರಣೀಯ.