ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕಳ್ಳಮಾರ್ಗದ ಮೂಲಕ ಎದುರಿಸುವ ಅಭ್ಯರ್ಥಿಗಳ ಪತ್ತೆಗೆ ಐರಿಸ್ (ಕಣ್ಣಿನ ಪಾಪೆ) ಸ್ಕ್ಯಾನ್ನಂತಹ ಅತ್ಯಾಧುನಿಕ ‘ಕಣ್ಗಾವಲು’ ವ್ಯವಸ್ಥೆ ಅಳವಡಿಸಲು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಮುಂದಾಗಿರುವುದು ಸ್ವಾಗತಾರ್ಹ. ಆದರೆ ಕೆಪಿಎಸ್ಸಿ, ಪರೀಕ್ಷಾಪೂರ್ವ ಮತ್ತು ಪರೀಕ್ಷಾ ನಂತರದ ಅಕ್ರಮಗಳಾದಂತಹ ಪ್ರಶ್ನೆಪತ್ರಿಕೆ ಸೋರಿಕೆ, ಒಎಂಆರ್ ಶೀಟ್ ತಿದ್ದುಪಡಿ ಯಂತಹ ಕೃತ್ಯಗಳನ್ನೂ ತಡೆಯಲು ಮುಂದಾಗುವುದೇ?. ಈ ಹಿಂದೆ, ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ, ಕೆಪಿಎಸ್ಸಿಯನ್ನು ಮುಚ್ಚುವುದೇ ಲೇಸು ಎಂದು ಹೈಕೋರ್ಟ್ ಹೇಳಿದ್ದುದನ್ನು ಮರೆಯುವಂತಿಲ್ಲ.