ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್ಆರ್ಟಿಸಿ) ಉತ್ತಮ ಸೇವೆಗಾಗಿ ಹಲವಾರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಇದು ರಾಜ್ಯಕ್ಕೆ ಹೆಮ್ಮೆಯ ವಿಚಾರ. ಆದರೆ, ಸಮಾಜದ ದುರ್ಬಲ ವರ್ಗವಾದ ಅಂಗವಿಕಲರಿಗೆ ನಿಲ್ದಾಣಗಳಲ್ಲಿ ಎಲ್ಲಿಯೂ ಬಸ್ಸನ್ನು ಹತ್ತಲು ಮತ್ತು ಇಳಿಯಲು ‘ಅಂಗವಿಕಲಸ್ನೇಹಿ’ ವಾತಾವರಣ ಕಲ್ಪಿಸದಿರುವುದು ಹಾಗೂ ಕೋರಿಕೆ ನಿಲುಗಡೆ ನೀಡದಿರುವುದು ದುರದೃಷ್ಟಕರ.