ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಕಾರ್ಯವಾಹರಾಗಿ ಕನ್ನಡಿಗರಾದ ದತ್ತಾತ್ರೇಯ ಹೊಸಬಾಳೆ ಅವರು ಆಯ್ಕೆ ಆಗಿರುವುದು ಸರಿಯಷ್ಟೆ. ಜನಸಂಘದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಭಾರತೀಯ ಭಾಷೆಗಳೇ ಭಾರತದ ಶಕ್ತಿ ಎಂದು ಪ್ರತಿಪಾದಿಸಿದ್ದರು. ದುರಂತ ಎಂದರೆ, ಒಕ್ಕೂಟ ಭಾರತದ ಸಂವಿಧಾನ ಜಾರಿಯಾದ ದಿನದಿಂದ ಹಿಡಿದು ಇಂದಿನವರೆಗೂ ಅವ್ಯಾಹತವಾಗಿ ಹಿಂದಿಯೊಂದನ್ನು ಮೆರೆಸಿ, ಉಳಿದ ಭಾರತೀಯ ಭಾಷೆಗಳನ್ನು ಕಡೆಗಣಿಸಲಾಗಿದೆ.