ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ವೀರಪುತ್ರನ ಶ್ಲಾಘನೀಯ ನಡೆ

Last Updated 25 ಫೆಬ್ರುವರಿ 2021, 17:52 IST
ಅಕ್ಷರ ಗಾತ್ರ

ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಬೈರಗೊಂಡನಹಳ್ಳಿಯಲ್ಲಿ ತಾಯಿ– ಮಗ ಹೊಲದಿಂದ ಮನೆಗೆ ತೆರಳುವಾಗ, ದಿಢೀರನೆ ತಾಯಿಯ ಮೇಲೆರಗಿದ ನರಭಕ್ಷಕ ಚಿರತೆಯೊಂದಿಗೆ ಮಗ ಹೋರಾಡಿ ತಮ್ಮಿಬ್ಬರ ಪ್ರಾಣವನ್ನೂ ರಕ್ಷಿಸಿರುವುದು ನಾಡಿನ ಜನ ಹೆಮ್ಮೆ ಪಡುವಂತಹ ವಿಷಯ. ಈಗಿನ ಕಾಲದಲ್ಲಿ ಎಷ್ಟೋ ಮಕ್ಕಳು ಹೆತ್ತವರನ್ನು ವೃದ್ಧರಾದಾಗ ಸರಿಯಾಗಿ ನೋಡಿಕೊಳ್ಳದೆ ಅನಾಥಾಶ್ರಮಕ್ಕೆ ಸೇರಿಸುವ ನಿದರ್ಶನಗಳಿವೆ. ಇಂತಹ ಸ್ಥಿತಿಯ ನಡುವೆ ತಾಯಿಯ ಮೇಲಿನ ಈ ಬಗೆಯ ಉತ್ಕಟ ಪ್ರೀತಿ ಎಲ್ಲ ಮಕ್ಕಳಲ್ಲೂ ಮೂಡುವಂತಾಗಲಿ. ಸರ್ಕಾರ ಈ ವೀರ ಮಗ ಮತ್ತು ತಾಯಿಯ ಚಿಕಿತ್ಸಾ ವೆಚ್ಚ ಭರಿಸಿ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಿ.‌

ಇರ್ಫಾನ್, ರೋಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT