ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಬೈರಗೊಂಡನಹಳ್ಳಿಯಲ್ಲಿ ತಾಯಿ– ಮಗ ಹೊಲದಿಂದ ಮನೆಗೆ ತೆರಳುವಾಗ, ದಿಢೀರನೆ ತಾಯಿಯ ಮೇಲೆರಗಿದ ನರಭಕ್ಷಕ ಚಿರತೆಯೊಂದಿಗೆ ಮಗ ಹೋರಾಡಿ ತಮ್ಮಿಬ್ಬರ ಪ್ರಾಣವನ್ನೂ ರಕ್ಷಿಸಿರುವುದು ನಾಡಿನ ಜನ ಹೆಮ್ಮೆ ಪಡುವಂತಹ ವಿಷಯ. ಈಗಿನ ಕಾಲದಲ್ಲಿ ಎಷ್ಟೋ ಮಕ್ಕಳು ಹೆತ್ತವರನ್ನು ವೃದ್ಧರಾದಾಗ ಸರಿಯಾಗಿ ನೋಡಿಕೊಳ್ಳದೆ ಅನಾಥಾಶ್ರಮಕ್ಕೆ ಸೇರಿಸುವ ನಿದರ್ಶನಗಳಿವೆ. ಇಂತಹ ಸ್ಥಿತಿಯ ನಡುವೆ ತಾಯಿಯ ಮೇಲಿನ ಈ ಬಗೆಯ ಉತ್ಕಟ ಪ್ರೀತಿ ಎಲ್ಲ ಮಕ್ಕಳಲ್ಲೂ ಮೂಡುವಂತಾಗಲಿ. ಸರ್ಕಾರ ಈ ವೀರ ಮಗ ಮತ್ತು ತಾಯಿಯ ಚಿಕಿತ್ಸಾ ವೆಚ್ಚ ಭರಿಸಿ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಿ.