ಇಲ್ಲಿಯವರೆಗೂ ದಲಿತರು, ಅಲ್ಪಸಂಖ್ಯಾತರು ಮತ್ತು ದುರ್ಬಲ ವರ್ಗದವರ ಮೇಲೆ ಸಬಲರು ನಡೆಸುವ ಹಲ್ಲೆಗಳು ವರದಿಯಾಗುತ್ತಿದ್ದವು. ಈಗ ಇವುಗಳ ಜೊತೆಗೆ, ಅಸಹಾಯಕ ಜನಸಾಮಾನ್ಯರ ಮೇಲೆ ಅಧಿಕಾರ ಮತ್ತರಾದ ಜನಪ್ರತಿನಿಧಿಗಳು, ಸಂಬಂಧಿಕರು ಮತ್ತು ಅವರ ಬೆಂಬಲಿಗರು ನೈತಿಕತೆಯಿಲ್ಲದೆ, ಕಾನೂನಿನ ಭಯವಿಲ್ಲದೆ ನಡೆಸುವ ದಾಳಿಗಳೂ ಸೇರುತ್ತಿವೆ.