ಐಷಾರಾಮಿ ಕಾರುಗಳಲ್ಲಿ ತಿರುಗಾಡುವವರು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಬಡವರಿಗೆಂದೇ ಮೀಸಲಾದ ಪಡಿತರ ಪದಾರ್ಥಗಳನ್ನು ಯಾವುದೇ ಸಂಕೋಚವಿಲ್ಲದೆ ಸಿರಿವಂತರೂ ಬಳಕೆ ಮಾಡುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದವರಿಗೆಂದು ಜಾರಿಯಾದ ಅನೇಕ ಸಬ್ಸಿಡಿಗಳು ಮತ್ತು ಸ್ಕೀಮುಗಳನ್ನು ಭೇದಭಾವವಿಲ್ಲದೆ ಸರ್ವರೂ ಅನುಭವಿಸುತ್ತಿದ್ದಾರೆ. ಖೊಟ್ಟಿ ಮೀಸಲಾತಿ ದಾಖಲೆಗಳನ್ನು ನೀಡಿ ಶೈಕ್ಷಣಿಕ ಸವಲತ್ತು ಮತ್ತು ಸರ್ಕಾರಿ ಹುದ್ದೆಗಳನ್ನು, ಉಳ್ಳವರಲ್ಲಿ ಕೆಲವರು ಕಬಳಿಸುತ್ತಿದ್ದಾರೆ. ಇವು ಹೀಗೇ ಮುಂದುವರಿದರೆ ಬಡವರು ಬಡವರಾಗೇ ಇರುತ್ತಾರೆ ಮತ್ತು ಸಿರಿವಂತರು ಮತ್ತಷ್ಟು ಪ್ರಬಲರಾಗುತ್ತಾರೆ.