ಸಿಪಿಐ ಯುವ ಮುಖಂಡ ಕನ್ಹಯ್ಯ ಕುಮಾರ್ ಅವರ, ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಬಿ.ಆರ್.ಅಂಬೇಡ್ಕರ್ ಅಧ್ಯಯನ ಸಂಸ್ಥೆಯಲ್ಲಿನ ಉಪನ್ಯಾಸ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತವಾದುದು ಸರಿಯಲ್ಲ. ಏಕೆಂದರೆ, ಉಪನ್ಯಾಸ ನೀಡುವವರು ಬಲಪಂಥೀಯರೇ ಆಗಿರಲಿ ಎಡಪಂಥೀಯರೇ ಆಗಿರಲಿ ತಮ್ಮ ವಿಚಾರವನ್ನು ವ್ಯಕ್ತಪಡಿಸಲು ಭಾರತದ ಸಂವಿಧಾನ ಅವಕಾಶ ಕಲ್ಪಿಸಿದೆ. ಅಷ್ಟಕ್ಕೂ ಕನ್ಹಯ್ಯ ಒಬ್ಬ ಯುವ ಎಡಪಂಥೀಯ ಮುಖಂಡರೇ ವಿನಾ ಭಯೋತ್ಪಾದಕರೋ ಅಥವಾ ನಕ್ಸಲೀಯರೋ ಅಲ್ಲ.