ಇದೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ತಾಲ್ಲೂಕಿನ ಮಾರಡಗಿ ಗ್ರಾಮದಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿದರು.ಉರಿ ಬಿಸಿಲಿನಲ್ಲೂ ಬಿರುಸಿನ ಪ್ರಚಾರ ನಡೆಸಿದ ಅವರು ಈ ಬಾರಿ ಕ್ಷೇತ್ರದಲ್ಲಿ ಕಮಲ ಅರಳಿಸುವಂತೆ ಮನವಿ ಮಾಡಿದರು. ಅಶೋಕ ಕಣಕಿಕೊಪ್ಪ, ಶೇಕಪ್ಪ ಕುಸುಗಲ್, ಗಂಗಾಧರ ಕುಸುಗಲ್, ರಾಜು ಹೆಬ್ಬಳ್ಳಿ, ಮುಕ್ತಾರ ಅಲಿ ಗೋಡಿ, ಮುರಗೇಶ ಇದ್ದರು.