ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಸರ್ಕಾರವು ಅಪಾಯದ ಮುನ್ಸೂಚನೆಯನ್ನು ಅರಿಯದೆ ಎಲ್ಲ ಜಿಲ್ಲೆಗಳ, ವಿಜ್ಞಾನ ವಿಷಯದ ನೂರಾರು ಉಪನ್ಯಾಸಕರನ್ನು ಬೆಂಗಳೂರಿನಲ್ಲಿ ಸೇರಿಸಿ, 8 ಕೇಂದ್ರಗಳಲ್ಲಿ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಮುಂದಾಗಿದೆ. ಈ ಉಪನ್ಯಾಸಕರು ಒಂದೇ ಕಟ್ಟಡದಲ್ಲಿ ಮೌಲ್ಯಮಾಪನ ಮಾಡಬೇಕಿರುತ್ತದೆ. ಅಂತರ ಕಾಯ್ದುಕೊಳ್ಳುವುದು ಕಷ್ಟಸಾಧ್ಯ.