ಜಾತಿ ಹಿಡಿದು ಮೀಸಲಾತಿ ಕೇಳುತ್ತಾ ಹೊರಟಿರುವವರ ಅಬ್ಬರಕ್ಕೆ ಏನೆನ್ನುವುದು? ಬಾಯಲ್ಲಿ ಬಸವಣ್ಣನ ನುಡಿಮುತ್ತುಗಳನ್ನು ಉದುರಿಸುತ್ತಾ ಅಂತರಂಗದಲ್ಲಿ ಬರೀ ಕುಟಿಲ, ಸ್ವಾರ್ಥ, ಪ್ರತಿಷ್ಠೆ, ಜಾತೀಯತೆ ಇಟ್ಟುಕೊಂಡು ಕಟ್ಟಕಡೆಯ ಜಾತಿಗಳ ಮನುಷ್ಯರಿಗೆ ದೊರೆಯಬೇಕಾದ ಮೀಸಲಾತಿಯು ಬಹುಸಂಖ್ಯೆಯ ಬಲಾಢ್ಯರಾದ ತಮಗೇ ದೊರೆಯಬೇಕೆಂದು ಒತ್ತಡ ಹೇರುವುದು ಸರಿಯೇ? ಇಂತಹ ನಡೆಯು ಸಂವಿಧಾನದ ತತ್ವಗಳಾದ ಸಾಮಾಜಿಕ ನ್ಯಾಯ, ಸಹೋದರತೆ, ಸಮಾನತೆ, ಸ್ವಾತಂತ್ರ್ಯಕ್ಕೆ ತದ್ವಿರುದ್ಧ. ಇನ್ನಾದರೂ ಈ ಸ್ವಾಮಿಗಳು ‘ಇವ ನಮ್ಮವ, ಇವ ನಮ್ಮವ’ ಎಂಬ ವಿಶಾಲ ತತ್ವದಡಿ ಆತ್ಮಾವಲೋಕನ ಮಾಡಿಕೊಂಡು ಬಸವಣ್ಣನ ನಿಜ ತತ್ವ ಆಚರಿಸಲು ಮುಂದಾಗಲಿ. ಬೇಡುವವರಾಗದೆ ನೀಡುವವರಾಗಲಿ.