ಎರಡು ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸವುಳ್ಳ, ಶಾಸ್ತ್ರೀಯ ಸ್ಥಾನಮಾನ ಪಡೆದ ನಮ್ಮ ಹೆಮ್ಮೆಯ ‘ಕನ್ನಡ ಭಾಷೆ’ ಕೇವಲ ನಮಗೆ ಭಾಷೆಯಲ್ಲ, ನಮ್ಮ ಸ್ವಾಭಿಮಾನದ ಪ್ರತೀಕ, ನಮ್ಮ ಭಾವನೆಗಳ ಪಾರಮಾರ್ಥಿಕ ಸಂಕೇತವೂ ಹೌದು. ಚೆನ್ನಮ್ಮಾಜಿಯ ಸಾಹಸಗಾಥೆ, ರಾಯಣ್ಣನ ಶೌರ್ಯ, ಪರಾಕ್ರಮ ಹಾಗೂ ಗುರು ಬಸವಣ್ಣ
ನವರ ವಚನಸುಧೆ, ಕದಂಬರ ಕನ್ನಡ ಪ್ರೇಮ, ಶ್ರೀಕೃಷ್ಣದೇವರಾಯನ ಶ್ರೀಮಂತ ಸಾಮ್ರಾಜ್ಯ, ದಕ್ಷಿಣಾಧಿಪತಿಯಾಗಿ
ಅಫ್ಗಾನಿಸ್ತಾನದವರೆಗೂ ಆಳಿದ ಕನ್ನಡ ದೊರೆ ಇಮ್ಮಡಿ ಪುಲಿಕೇಶಿ, ಕವಿ ಕಾಳಿದಾಸ, ರನ್ನ, ಪಂಪನ ಆದಿಯಾಗಿ ಕುವೆಂಪು, ಕಂಬಾರರವರೆಗೂ ಛಾಪು ಮೂಡಿಸಿರುವ ಕನ್ನಡದ ಹಿರಿಮೆ ಅನಂತವಾದುದು.