ನಮ್ಮ ಮನೆಗಳ ಬಳಿ ಒಂದು ಪಾತ್ರೆಯಲ್ಲೋ ಮಡಕೆಯಲ್ಲೋ ನೀರಿಟ್ಟರೆ ಅವು ಕುಡಿದು ದಾಹ ತೀರಿಸಿಕೊಳ್ಳುತ್ತವೆ. ಕಾಂಕ್ರೀಟ್ ಕಾಡಿನಲ್ಲಿ ಅವುಗಳಿಗೆ ಈಗ ನೆಲೆ ಇಲ್ಲ. ಒಂದೆರಡು ವರ್ಷಗಳ ಹಿಂದೆ ಹದ್ದುಗಳು ಬೆಂಗಳೂರಿನಲ್ಲಿ ಹೆಚ್ಚಾಗಿ ಕಾಣುತ್ತಿದ್ದವು. ಆದರೆ ಈಗ ಅವುಗಳ ಸಂಖ್ಯೆ ಕ್ಷೀಣಿಸುತ್ತಿದೆ. ಪಾರಿವಾಳ, ಗುಬ್ಬಚ್ಚಿಗಳ ಸಂಖ್ಯೆಯೂ ಕಡಿಮೆಯಾಗಿದೆ. ಉಳಿದಿರುವ ಪಕ್ಷಿ ಸಂಕುಲವನ್ನಾದರೂ ರಕ್ಷಿಸೋಣ, ಮಾನವೀಯತೆ ಮೆರೆಯೋಣ.