ಗುರು ರಾಘವೇಂದ್ರ ಸಹಕಾರ ಬ್ಯಾಂಕಿನಲ್ಲಿ ಇದುವರೆಗೆ ₹ 2,317 ಕೋಟಿ ದುರ್ಬಳಕೆಯಾಗಿದ್ದು, 2018-19ನೇ ಸಾಲಿನ ಲೆಕ್ಕ ಪರಿಶೋಧನೆ ಬಾಕಿ ಉಳಿದಿದೆಯೆಂದು, ವಿಧಾನ ಪರಿಷತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಸಹಕಾರ ಸಚಿವರು ಉತ್ತರಿಸಿದ್ದಾರೆ. 2014-15ನೇ ಸಾಲಿನಲ್ಲಿ ಪ್ರಾರಂಭವಾಗುವ ಹಣದ ದುರ್ಬಳಕೆ 2017-18ನೇ ಸಾಲಿನವರೆಗೂ ಅವ್ಯಾಹತವಾಗಿ ಮುಂದುವರಿದರೂ, ಅದು ಸಂಬಂಧಿಸಿದ ಇಲಾಖೆಗಳ ಗಮನಕ್ಕೇ ಬಂದಿಲ್ಲವೆಂದರೆ ಚೋದ್ಯವೆನಿಸುತ್ತದೆ.