ಶುಲ್ಕ ರಿಯಾಯಿತಿ ಪಡೆದು ಎಂಬಿಬಿಎಸ್ ಪದವಿ ಮುಗಿಸಿದ ವೈದ್ಯರು ಗ್ರಾಮೀಣ ಸೇವೆ ಮಾಡುವುದು ಕಡ್ಡಾಯ. ಅದಕ್ಕೆ ವಿನಾಯಿತಿ ಕೋರಿ ಕೋರ್ಟ್ ಮೆಟ್ಟಿಲು ಹತ್ತಿದ್ದು ಸರಿಯಲ್ಲ. ಕೋರ್ಟ್ ಕೂಡಾ ವಿನಾಯಿತಿ ನಿರಾಕರಿಸಿ, ಸೂಕ್ತ ಅಭಿಪ್ರಾಯ ವ್ಯಕ್ತಪಡಿಸಿದೆ (ಪ್ರ.ವಾ., ಜುಲೈ 22). ಈಗತಾನೆ ವೈದ್ಯ ವೃತ್ತಿ ಆರಂಭಿಸುವ ಯುವ ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಇರುವ ಆರೋಗ್ಯ ವ್ಯವಸ್ಥೆಯನ್ನು ಸ್ವತಃ ನೋಡಬೇಕಾಗುತ್ತದೆ. ಹಳ್ಳಿಯ ಜನರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಎಷ್ಟು ಅನಿವಾರ್ಯವಾಗಿರುತ್ತದೆ ಎಂಬುದನ್ನು ಅರಿಯಬೇಕಾಗುತ್ತದೆ. ವೃತ್ತಿಯ ಆರಂಭದಲ್ಲಿ ಬಡಜನರ ಸೇವೆ ಮಾಡಬೇಕಾದುದು ಅತ್ಯವಶ್ಯಕ.