ಸೃಜನಶೀಲ ಭಾಷೆಗಳು ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಉಚ್ಚಾರಣೆ ಮತ್ತು ಪದ ಪ್ರಯೋಗಗಳಲ್ಲಿ ಬದಲಾಗುವುದು ಸ್ವಾಭಾವಿಕವೆಂಬ ಅರಿವು ಇಂದು ಸಾಮಾನ್ಯವಾಗಿದೆ. ಕನ್ನಡದಲ್ಲಿ, ಆಡುವ ಭಾಷೆ ಶುದ್ಧವಾಗಿರಬೇಕೆಂಬ ಅಭಿಪ್ರಾಯ ಇಂದು ಬಲಗೊಳ್ಳುತ್ತಿದೆ. ಆದರೆ ಶುದ್ಧ ಭಾಷೆಯೆಂದರೆ ಯಾವುದು? ಬರವಣಿಗೆಯ ಕನ್ನಡವೇ? ಪಾಣಿನಿ, ಪಿಂಗಳ ಮತ್ತಿತರ ವ್ಯಾಕರಣಕಾರರು ಸಂಸ್ಕೃತವನ್ನು ಹಲವು ಸೂತ್ರಗಳಲ್ಲಿ ಬಂಧಿಸಿ ಅದನ್ನು ಬರೀ ಕಲಿತವರಿಗೆ ಸೀಮಿತ ಗೊಳಿಸಿದ್ದು ಭಾರತದಲ್ಲಿ ಶುದ್ಧ ಭಾಷೆಯೆನ್ನುವ ಭ್ರಮೆ ಮೂಡಲು ಕಾರಣ. ಭಾಷೆ ಎಲ್ಲರಿಗೂ ಸುಲಭವಾಗಿ ದಕ್ಕದೆನ್ನುವ ಕಲಿತವರ ಅಹಂಕಾರ ಮತ್ತು ಕಲಿಯದವರ ಕಡೆಗಿನ ಪೂರ್ವಗ್ರಹಗಳು ಈ ಭ್ರಮೆಯನ್ನು ಜೀವಂತವಾಗಿಟ್ಟಿವೆ. ಇಂತಹ ಶುದ್ಧತೆಯ ಅವಶ್ಯಕತೆಯಿಂದಲೇ ಆರಂಭಿಕ ಕನ್ನಡದ ಬರವಣಿಗೆಗಳು ಜನಸಾಮಾನ್ಯರನ್ನು ದೂರವಿಟ್ಟವು.