ಶುದ್ಧ ಕನ್ನಡಕ್ಕೆ ಸಂಬಂಧಿಸಿದಂತೆ ಅಬ್ದುಲ್ ರೆಹಮಾನ್ ಪಾಷ ಅವರ ಲೇಖನ (ಸಂಗತ, ಡಿ. 10) ಉತ್ತಮವಾಗಿ ಮೂಡಿಬಂದಿದೆ. ಕನ್ನಡ ಭಾಷೆಯು ಹಲವು ಭಾಷೆಗಳಲ್ಲಿನ ಕೆಲ ಶಬ್ದಗಳನ್ನು ಸ್ವೀಕರಿಸಿ ಶ್ರೀಮಂತವಾಗಿದೆ. ಸಂಸ್ಕೃತ ಶಬ್ದಗಳನ್ನು ಬಳಸದೇ ಕಾವ್ಯ ರಚಿಸಿದ ಕೀರ್ತಿಯು ಆಂಡಯ್ಯನಿಗೆ ಲಭಿಸಿತ್ತು. ಎಲ್ಲರೂ ಆಂಡಯ್ಯನಂತೆ ಆಗಲು ಸಾಧ್ಯವಿಲ್ಲ. ಈಗಿನ ಆಡಳಿತಾತ್ಮಕ ಕನ್ನಡದಲ್ಲಿ ತಹಶೀಲ್ದಾರ್, ಸರ್ಕಾರ, ಪೊಲೀಸ್, ಬಸ್ಸ್ಟ್ಯಾಂಡ್, ಮೋಟರ್ ಮುಂತಾದವುಗಳನ್ನು ನಮ್ಮದಾಗಿ ಸ್ವೀಕರಿಸಿದ್ದೇವೆ. ಒಳಗೊಳ್ಳುವುದೇ ಜೀವಂತ ಭಾಷೆಯ ಲಕ್ಷಣ.