ಒಂದು ಮಠದ ಪೀಠಾಧಿಪತಿಯಾಗಿ ಮಠಾಧೀಶರು ಜಾತಿಭೇದ ಮರೆತು, ಮಠಗಳಿಗೆ ಬರುವ ಲಕ್ಷಾಂತರ ಜನರಿಗೆ ಸನ್ಮಾರ್ಗವನ್ನು ತೋರಿಸಬೇಕಾಗುತ್ತದೆ. ಅಂತಹವರು ವ್ಯಕ್ತಿಯೊಬ್ಬರ ಪರವಾಗಿ ಬಹಿರಂಗವಾಗಿ ಹೇಳಿಕೆ ನೀಡಿ, ರಾಜಕಾರಣ ಮಾಡುತ್ತಿರುವುದು ಸರಿಯಲ್ಲ. ಸನ್ಮಾರ್ಗವನ್ನು ತೋರಬೇಕಾದ ಗುರುಗಳು ಇನ್ನಾದರೂ ರಾಜಕಾರಣದ ಉಸಾಬರಿ ಬಿಟ್ಟು, ಸಮಾಜದಲ್ಲಿನ ಕೊಳಕುಗಳನ್ನು ತೊಲಗಿಸುವ ಕೆಲಸದಲ್ಲಿ ತೊಡಗಲಿ. ಆ ಮೂಲಕ ಘನತೆ ಉಳಿಸಿಕೊಳ್ಳಲಿ.