ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ಸೋಂಕು ಹರಡಲು ಸರ್ಕಾರದ ರತ್ನಗಂಬಳಿ

Last Updated 28 ಡಿಸೆಂಬರ್ 2021, 20:23 IST
ಅಕ್ಷರ ಗಾತ್ರ

‘ರಾತ್ರಿ ಕರ್ಫ್ಯೂ, ಹಗಲು ರ‍್ಯಾಲಿ ಯಾಕೆ’ ಎಂಬ ಸಂಸದ ವರುಣ್ ಗಾಂಧಿ ಅವರ ಪ್ರಶ್ನೆ (ಪ್ರ.ವಾ., ಡಿ. 28) ಸರ್ವಸಮ್ಮತವಾದದ್ದು. ಹಗಲಿನಲ್ಲಿ ಆಡಳಿತಾರೂಢ ಪಕ್ಷಗಳೇ ಚುನಾವಣಾ ರ‍್ಯಾಲಿಗಳನ್ನು ಆಯೋಜಿಸುತ್ತಿವೆ. ಇದರಿಂದ ಜನಸಂದಣಿ ಉಂಟಾಗಿ, ಸೋಂಕು ಹರಡಲು ಸರ್ಕಾರವೇ ರತ್ನಗಂಬಳಿ‌ ಹಾಸಿಕೊಟ್ಟಂತೆ ಆಗುವುದಿಲ್ಲವೇ?

ಹೆಚ್ಚಿನ ಕೆಲಸ ಕಾರ್ಯಗಳನ್ನು ಆನ್‌ಲೈನ್ ಮೂಲಕವೇ ಮಾಡುವಂತೆ ಶಿಕ್ಷಣ ಸಂಸ್ಥೆಗಳು, ಐ.ಟಿ., ಬಿ.ಟಿ. ಕಂಪನಿಗಳಿಗೆ ಸರ್ಕಾರ ಒತ್ತಡ ಹೇರುತ್ತಿರುವಾಗ, ಚುನಾವಣಾ ಪ್ರಚಾರದ ರ‍್ಯಾಲಿಗಳನ್ನೂ ಹೀಗೇ ಯಾಕೆ ಮಾಡ ಬಾರದು? ನಿಮ್ಮ ಸಾಧನೆಗಳನ್ನು ಅಬ್ಬರದ ಪ್ರಚಾರದ ಮೂಲಕವೇ ಏಕೆ ಮಾಡಬೇಕು? ಮನ್ ಕಿ ಬಾತ್, ಕೋವಿಡ್ ಸಂದೇಶಗಳು, ಸಭೆಗಳು, ಲಾಕ್‌ಡೌನ್‌ಗೆ ಸಂಬಂಧಿಸಿದ ಬ್ರೇಕಿಂಗ್ ಸುದ್ದಿಗಳನ್ನು ಆನ್‌ಲೈನ್ ಮೂಲಕವೇ ಇಡೀ ದೇಶಕ್ಕೆ ತಲುಪಿಸಿರುವಾಗ, ಆಯಾ ರಾಜ್ಯದ ಚುನಾವಣಾ ಪ್ರಚಾರವನ್ನೂ ಆನ್‌ಲೈನ್‌ ಮೂಲಕವೇ ಮಾಡುವಂತೆ ಆಗಬೇಕು. ಇದರಿಂದ ದೇಶಕ್ಕೂ ಕ್ಷೇಮ ಮತ್ತು ಹಣ ಉಳಿತಾಯ.

ಅಶ್ವತ್ಥ ಕಲ್ಲೇದೇವರಹಳ್ಳಿ,ಕುಂಕಾನಾಡು, ಕಡೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT