ಮೂರು ಹಂತದ ಪರಿಶೀಲನೆ ನಡೆಸಿ ಮೀಸಲಾತಿ ನಿಗದಿಪಡಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿ ದಶಕವೇ ಸಂದಿದ್ದರೂ ಮೀಸಲಾತಿ ತೊಡಕು ನಿವಾರಣೆಗೆ ಈಗಷ್ಟೇ ನ್ಯಾಯಮೂರ್ತಿಯೊಬ್ಬರ ನೇತೃತ್ವದ ಆಯೋಗವೊಂದನ್ನು ರಚಿಸಿ, ವರದಿ ನೀಡಲು ಕಾಲಮಿತಿಯನ್ನೇ ವಿಧಿಸದಿರುವ ರಾಜ್ಯ ಸರ್ಕಾರದ ನಡೆ, ಸಾಧ್ಯವಾದಷ್ಟೂ ದಿನ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡುವ ಹುನ್ನಾರ. ಸಾಂವಿಧಾನಿಕ ಕರ್ತವ್ಯದಿಂದ ನುಣುಚಿಕೊಳ್ಳುವ ಯತ್ನವನ್ನು ಸರ್ಕಾರ ಇನ್ನಾದರೂ ಮುಂದುವರಿಸದಿರಲಿ.