ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಅಗ್ನಿಪಥ ಯೋಜನೆಯ ಬಗ್ಗೆ, ಒಬ್ಬ ಮಗನ ಜವಾಬ್ದಾರಿಯುತ ತಂದೆಯಾಗಿ ನನ್ನಲ್ಲಿ ಕೆಲವು ಗೊಂದಲಗಳು ಕಾಡುತ್ತಿವೆ. ಹದಿನೇಳೂವರೆ ವರ್ಷದ ವಯಸ್ಸಿನ ಮಿತಿ ಇದೆ. ಆ ವಯಸ್ಸಿಗೆ ಎಸ್ಎಸ್ಎಲ್ಸಿ ಅಥವಾ ಕೆಲವರಿಗೆ ಪಿಯುಸಿ ಕಲಿಯಲು ಸಾಧ್ಯ ಆಗಬಹುದು. ಅಷ್ಟು ಮಾತ್ರ ಕಲಿತವರನ್ನು ಅಗ್ನಿಪಥಕ್ಕೆ ಸೇರಿಸಿಕೊಂಡು, ಅವರಿಗೆ ತರಬೇತಿ ಕೊಟ್ಟು, ನಾಲ್ಕು ವರ್ಷ ಸೈನ್ಯದ ಸೇವೆ ಮಾಡಿಸಿ, ಆನಂತರ 22ನೇ ವಯಸ್ಸಿಗೆ ಯೋಜನೆ ಪ್ರಕಾರ ಸೈನ್ಯ ಬಿಟ್ಟು ಮಗ ಮನೆಗೆ ಬಂದರೆ, ಅವನ ಭವಿಷ್ಯ ಏನಾಗಬೇಕು? ಇತ್ತ ವಿದ್ಯಾಭ್ಯಾಸ ಅಪೂರ್ಣವಾಗಿರುತ್ತದೆ, ಅತ್ತ ಮುಂದಕ್ಕೆ ಕಲಿಯುವ ಮನಸ್ಸೂ ಹೋಗಿರುತ್ತದೆ, ಕೈಯಲ್ಲಿ ಉದ್ಯೋಗವೂ ಇರುವುದಿಲ್ಲ. ರಾಜ್ಯ ಸರ್ಕಾರದ ಇಲ್ಲವೇ ಕೇಂದ್ರ ಸರ್ಕಾರದ ಉದ್ಯೋಗದಲ್ಲಿ ಮೀಸಲಾತಿ ಆಸೆ ತೋರಿಸಲಾಗುತ್ತಿದೆಯಷ್ಟೆ, ಆ ಹೊತ್ತಿಗೆ ಕಲಿಯಲಾದ ಶಿಕ್ಷಣಕ್ಕೆ ತಕ್ಕಂತೆ ಮಕ್ಕಳಿಗೆ ಯಾವ ಕೆಲಸದಲ್ಲಿ ಮೀಸಲಾತಿ
ಕೊಡಬಹುದು?