ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ಸಿಟ್ಟು ತಣಿಸುವ ಪ್ರಯತ್ನ...

Last Updated 2 ಡಿಸೆಂಬರ್ 2022, 19:31 IST
ಅಕ್ಷರ ಗಾತ್ರ

‘ದಿ ಕಾಶ್ಮೀರ್‌ ಫೈಲ್ಸ್’ ಚಲನಚಿತ್ರದ ಬಗ್ಗೆ ಗೋವಾದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ತೀರ್ಪುಗಾರರ ಮಂಡಳಿಯ ಅಧ್ಯಕ್ಷರಾದ ಇಸ್ರೇಲ್‌ನ ನೆದಾವ್‌ ಲಪಿಡ್‌ ಅವರು ನೀಡಿದ ಹೇಳಿಕೆಗಾಗಿ ಇಸ್ರೇಲ್ ರಾಯಭಾರಿ ಭಾರತದ ಕ್ಷಮೆ ಕೇಳುವ ಅಗತ್ಯವಿರಲಿಲ್ಲ. ಸಂಪಾದಕೀಯದಲ್ಲಿ ಬರೆದಿರುವಂತೆ (ಪ್ರ.ವಾ., ಡಿ. 1), ಈ ಹೇಳಿಕೆ ಎರಡೂ ದೇಶಗಳ ನಡುವಿನ ಸಂಬಂಧವನ್ನು ಹಾಳು ಮಾಡುವಂಥದ್ದಾಗಿರಲಿಲ್ಲ ನಿಜ. ಆದರೆ ಭಾರತವು ಇಸ್ರೇಲಿನಿಂದ ಬಹಳಷ್ಟು ತಂತ್ರಜ್ಞಾನವನ್ನು ಅಮದು ಮಾಡಿಕೊಳ್ಳುತ್ತದೆ. ಬಹುಶಃ ಅಂತಹ ವ್ಯವಹಾರದ ಮೇಲೆ ಈ ಹೇಳಿಕೆ ಏನೂ ಪರಿಣಾಮ ಬೀರದಿದ್ದರೂ ತೆರೆಯ ಹಿಂದಿನ ಮತ್ತು ಸರ್ಕಾರಗಳ ನಡುವೆ ಮಾತ್ರ ನಡೆಯುವ ಒಪ್ಪಂದಗಳು, ವ್ಯವಹಾರಗಳ ಮೇಲೆ ಇದು ದೊಡ್ಡ ಪರಿಣಾಮವನ್ನೇ ಬೀರುತ್ತಿತ್ತೇನೊ. ಅದಕ್ಕಾಗಿಯೇ, ಮುನಿಸಿಕೊಂಡ ಮಗುವನ್ನು ಸಮಾಧಾನಪಡಿಸುವ ರೀತಿಯಲ್ಲಿ ಸರ್ಕಾರದ ಕೋಪವನ್ನು ಬೇಗ ತಣಿಸಲು ಇಸ್ರೇಲಿಗೆ ಈ ಕ್ಷಮೆಯಾಚನೆ ಅನಿವಾರ್ಯವಾಗಿತ್ತು ಅನಿಸುತ್ತದೆ!

- ರವಿಕಿರಣ್ ಶೇಖರ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT