ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ಆಂಜನೇಯನ ಶಕ್ತಿ ಅರಿವಾಗಲು...

Last Updated 11 ಮೇ 2020, 19:45 IST
ಅಕ್ಷರ ಗಾತ್ರ

ಐದು ವರ್ಷದ ಮೊಮ್ಮಗನ ಚಿಕಿತ್ಸೆಗಾಗಿ ಮಹಿಳೆಯೊಬ್ಬರು 130 ಕಿ.ಮೀ. ಸೈಕಲ್ ತುಳಿದು, ಆತನನ್ನು ಆಸ್ಪತ್ರೆಗೆ ಕರೆದೊಯ್ದದ್ದು (ಪ್ರ.ವಾ., ಮೇ 10) ಮನ ಮಿಡಿಯುವಂತಿದೆ. ಮಹಿಳೆಯರನ್ನು ದುರ್ಬಲರು ಎಂದು ಪರಿಗಣಿಸುವ ಜನರಿಗೆ ಇದೊಂದು ಪಾಠ. ಆಂಜನೇಯನ ಶಕ್ತಿ ಅವನಿಗೆ ಅರಿವಾಗಲು ಬೇರೆಯವರ ಸಹಾಯ ಬೇಕಿತ್ತು. ಅದೇ ರೀತಿ, ಸಂದರ್ಭಕ್ಕೆ ಕಟ್ಟುಬಿದ್ದು ಅಷ್ಟೊಂದು ದೂರ ಸೈಕಲ್ ತುಳಿದದ್ದು ಆಕೆಯ ಮಾನಸಿಕ ಸ್ಥಿರತೆ ಹಾಗೂ ದಿಟ್ಟವಾದ ಧ್ಯೇಯವನ್ನು ಸಾಬೀತುಪಡಿಸಿದೆ. ಪ್ರತೀ ಮಹಿಳೆಯೂ ಸಂದರ್ಭಕ್ಕೆ ಸರಿಯಾಗಿ ತನ್ನ ನಿಗೂಢ ಶಕ್ತಿಯನ್ನು ಉಪಯೋಗಿಸಲು ಸಾಧ್ಯವಾದರೆ, ಎಷ್ಟೋ ಕಷ್ಟಗಳಿಂದ ಆಕೆ ಪಾರಾಗಬಹುದೇನೊ.

- ಬಾಲಕೃಷ್ಣ ಎಂ.ಆರ್.,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT