ಯಶವಂತ ಸಿನ್ಹಾ ಅವರೂ ರಾಷ್ಟ್ರಪತಿ ಸ್ಥಾನಕ್ಕೆ ಅರ್ಹರು. ಆದರೆ, ಬೇರೆ ಬೇರೆ ರೀತಿಯಲ್ಲಿ ಶೋಷಣೆಗೆ ಒಳಗಾಗಿ ನೊಂದ ಆದಿವಾಸಿ ಮಹಿಳೆಯರನ್ನು ಪ್ರತಿನಿಧಿಸುವ ದ್ರೌಪದಿ ಅವರನ್ನು ವಿರೋಧ ಪಕ್ಷಗಳು ಬೆಂಬಲಿಸಿ, ರಾಷ್ಟ್ರಪತಿಯಾಗಿ ಅವರು ಅವಿರೋಧವಾಗಿ ಆಯ್ಕೆಯಾಗಲು ಅವಕಾಶ ಮಾಡಿಕೊಡುವುದು ಸೂಕ್ತ ಮತ್ತು ಅರ್ಥಪೂರ್ಣವಾದುದು. ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರು ಈ ಕುರಿತು ಪರಸ್ಪರ ಚಿಂತನೆ ಮಾಡಿ, ಸಕಾರಾತ್ಮಕವಾದ ಒಟ್ಟಭಿಪ್ರಾಯಕ್ಕೆ ಬರಬೇಕು. ಜನಪ್ರತಿನಿಧಿಗಳು, ಬುದ್ಧಿಜೀವಿಗಳು, ಸಮಾಜಮುಖಿ ಚಿಂತಕರು ಹಾಗೂ ಸಂಘಟನೆಗಳು ಇಂತಹ ಅವಿರೋಧ ಆಯ್ಕೆಗೆ ಎಲ್ಲ ಪಕ್ಷಗಳ ಮನವೊಲಿಸಲು ಪ್ರಯತ್ನಿಸಬೇಕು.