ಕೆಲವು ಸ್ವಾಮೀಜಿಗಳು ಮತ್ತು ಸಮುದಾಯಗಳ ಮುಖಂಡರ ಮುಂದಾಳತ್ವದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟಗಳು, ಸಭೆಗಳು, ಮೀಸಲಾತಿ ಹೆಚ್ಚಳಕ್ಕಾಗಿ ಸರ್ಕಾರಕ್ಕೆ ಕೊಡುತ್ತಿರುವ ಗಡುವು ಮತ್ತು ತರಹೇ ವಾರಿ ಪತ್ರಿಕಾಗೋಷ್ಠಿಗಳನ್ನು ನೋಡಿದರೆ, ಇವರೆಲ್ಲ ಬಸವಾದಿ ಶರಣರ ತತ್ವ, ಕನಕದಾಸರ ಕೀರ್ತನೆಯ ಸಾರ, ಶರೀಫರ ಗೀತೆಯ ಅರ್ಥ, ಕಬೀರದಾಸರು, ಗುರುನಾನಕರ ಸಮಾಜ ಸುಧಾರಣೆ ಮೌಲ್ಯಗಳನ್ನು ಗಾಳಿಗೆ ತೂರಿದ್ದಾರೆ, ಅವು ತಮಗೆ ಅನ್ವಯವಾಗುವುದಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಅನಿಸದೇ ಇರದು.