ಖಾಲಿಯಾಗುವ ಶಿಕ್ಷಕ ಹುದ್ದೆಗಳಿಗೆ ತಕ್ಷಣವೇ ನೇಮಕ ಮಾಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಹಳ ಮಹತ್ವದ ಹೇಳಿಕೆ ನೀಡಿದ್ದಾರೆ (ಪ್ರ.ವಾ., ಸೆ. 6). ಇದು, ಮತ ಗಳಿಕೆಯ ರಾಜಕೀಯ ಹೇಳಿಕೆಯಾಗದೆ, ಕಾರ್ಯಗತ ವಾದಾಗ ಮಾತ್ರ ಅದಕ್ಕೊಂದು ಅರ್ಥ ಬರುತ್ತದೆ. ಏಕೆಂದರೆ ಅಗತ್ಯಕ್ಕೆ ಅನುಗುಣವಾಗಿ ಶಿಕ್ಷಕರಿಲ್ಲದೆ ನಮ್ಮ ಗ್ರಾಮಾಂತರ ಶಾಲೆಗಳು ಹಾಳಾಗುತ್ತಿವೆ. ಈ ಶಾಲೆಗಳಲ್ಲಿ ಕಲಿಯುತ್ತಿರುವವರು ಜನಸಾಮಾನ್ಯರ ಮಕ್ಕಳು ಎಂಬುದು ಸರ್ಕಾರದ ಗಮನದಲ್ಲಿರಬೇಕು. ಹೀಗಾಗಿ ಅಗತ್ಯಕ್ಕೆ ಅನುಗುಣವಾಗಿ ಶಿಕ್ಷಕರಿಲ್ಲದಿದ್ದರೆ ಜನಸಾಮಾನ್ಯರ ಮಕ್ಕಳ ಶಿಕ್ಷಣದ ಹಕ್ಕನ್ನೇ ಸರ್ಕಾರ ಕಸಿದುಕೊಂಡಂತಾಗುತ್ತದೆ.