ಅಕ್ರಮ ಮಾರ್ಗಗಳಿಂದ ಪಡೆದಿದ್ದ 3.30 ಲಕ್ಷ ನಕಲಿ ಪಡಿತರ ಚೀಟಿಗಳನ್ನು ರಾಜ್ಯ ಸರ್ಕಾರವು ಪತ್ತೆ ಹಚ್ಚಿ ರದ್ದ ುಗೊಳಿಸಿದ್ದು ಶ್ಲಾಘನೀಯ. ಅನರ್ಹರ ಪಾಲಾಗುತ್ತಿದ್ದ ಪಡಿತರ ಪದಾರ್ಥಗಳು ಇನ್ನು ಮುಂದಾದರೂ ದುರುಪಯೋಗ ವಾಗದಂತೆ ನೋಡಿಕೊಳ್ಳುವುದು ಮುಖ್ಯ. ಆಹಾರ ಇಲಾಖೆಯು ಈ ಪಾರದರ್ಶಕತೆಯನ್ನು ನಿರಂತರವಾಗಿ ಕಾಪಾಡಿಕೊಂಡು, ಪಡಿತರ ಯೋಜನೆಯನ್ನು ದುರುಪಯೋಗ ಮಾಡಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳ ಬೇಕು. ಹಾಗೆಯೇ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು.