ಇದಕ್ಕೆ ಉದಾಹರಣೆ ಎಂಬಂತೆ ಕೆಲವು ಅಧಿಕಾರಿಗಳು, ನಿರಪರಾಧಿ ಯುವಕರನ್ನು ಶಿಕ್ಷಿಸುತ್ತಿರುವುದು ಬೇಸರ ಮೂಡಿಸುತ್ತದೆ. ಬೆಂಗಳೂರಿನ ಬಸವನಗುಡಿ ಹಾಗೂ ಸಿದ್ಧಾಪುರ ಠಾಣೆಯ ಪೊಲೀಸರು ಈಚೆಗೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದವರನ್ನು ಪತ್ತೆ ಮಾಡುವ ಸಲುವಾಗಿ ಅಂಥ ಆರೋಪಿಗಳ ಮನೆಯ ಅಕ್ಕಪಕ್ಕದ ಯುವಕರನ್ನು ಹಿಡಿದು, ಠಾಣೆಯಲ್ಲಿಟ್ಟು ಶಿಕ್ಷಿಸಿದ್ದಾರೆ. ಇಂಥ ಯುವಕರ ಪೋಷಕರು ಠಾಣೆಗೆ ಹೋದಾಗ ಅವರನ್ನೂ ಅವಮಾನಿಸಿ ಕಳುಹಿಸಿರುವುದು ಪೊಲೀಸರಲ್ಲಿ ಮಾನವೀಯತೆ ಕಡಿಮೆಯಾಗುತ್ತಿರುವುದನ್ನು ಸೂಚಿಸುತ್ತದೆ.