ರಾಜ್ಯದ ಬಜೆಟ್ನ ಶೇ 26ರಷ್ಟನ್ನು ಕೃಷಿಗೆ ಮೀಸಲು ಇಟ್ಟ ದೇಶದ ಮೊದಲ ರಾಜ್ಯವೂ ಇದಾಗಿದೆ. ₹ 37,968 ಕೋಟಿಗಳನ್ನು ಕೃಷಿ ವಲಯಕ್ಕೆ ಮೀಸಲು ಇರಿಸಲಾಗಿದೆ. ಇದರಿಂದ ರಾಜ್ಯದ ಕೃಷಿ ಉತ್ಪಾದನೆಯು 1.01 ಕೋಟಿ ಟನ್ಗಳಿಗೆ ಏರಿಕೆಯಾಗಿದೆ. ಬೆಲೆ ಸ್ಥಿರತೆ ಯೋಜನೆ ಜಾರಿಗೆ ತಂದಿರುವ ರಾಜ್ಯ ಸರ್ಕಾರವು, ಟ್ರ್ಯಾಕ್ಟರ್ ಖರೀದಿಗೆ ಶೇ 50ರಷ್ಟು ಸಬ್ಸಿಡಿಯನ್ನೂ ನೀಡುತ್ತಿದೆ.