‘ವರ್ಗಾವಣೆ ಪ್ರಕ್ರಿಯೆ ನಾಳೆಯಿಂದ ಆರಂಭ, ನಾಡಿದ್ದಿನಿಂದ ಆರ೦ಭ’ ಎಂದು ಕೇಳುವುದೇ ಆಗಿದೆ. ಶಿಕ್ಷಣ ಸಚಿವರ ರಾಜೀನಾಮೆಯು ಶಿಕ್ಷಕರ ವರ್ಗಾವಣೆಯ ನಿರೀಕ್ಷೆಯ ಮೇಲೆ ಮೊದಲು ತಣ್ಣೀರೆರಚಿತು. ‘ವರ್ಗಾವಣೆಯನ್ನು ಮುಂದಿನ ಏಪ್ರಿಲ್ಗೆ ಮುಂದೂಡಿ’ ಎಂದು ಮುಖ್ಯಮಂತ್ರಿಯೇ ಈಗ ಸೂಚನೆ ನೀಡಿದ್ದರಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ವರ್ಗಾವಣೆಯ ಆಸೆಯನ್ನೇ ಕೈಬಿಡುವ೦ತಾಗಿದೆ.