ಬಿಜೆಪಿಯ ಕೆಲವು ನಾಯಕರಿಗೆ ನಾಲ್ಕಾರು ದಶಕಗಳ ರಾಜಕಾರಣದ ಅನುಭವವಿದ್ದರೂ ಈ ಬಾರಿ ವಿರೋಧಿಗಳ ಷಡ್ಯಂತ್ರವನ್ನು ಅರಿಯುವಲ್ಲಿ ಅವರು ವಿಫಲರಾದರು. ರಾಜ್ಯದಲ್ಲಿ ಪಕ್ಷವು ಒಡೆದ ಮನೆಯಾಗಿರುವುದೂ ಇದಕ್ಕೆ ಕಾರಣ. ಪಕ್ಷದ ಎರಡನೇ ಶ್ರೇಣಿಯ ನಾಯಕರಿಗೆ ವೈಯಕ್ತಿಕ ಪ್ರತಿಷ್ಠೆಯೇ ಮುಖ್ಯವಾಗಿ, ಪಕ್ಷನಿಷ್ಠೆ, ಬದ್ಧತೆ, ಕರ್ತವ್ಯಪ್ರಜ್ಞೆ ಮರೆಯಾದಂತಿದೆ.