ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಸಾಹಿತಿ ಚಂದ್ರಶೇಖರ ಕಂಬಾರರು ಮೀ ಟೂ ಕುರಿತಾಗಿ ನೀಡಿರುವ ಹೇಳಿಕೆ ಆಕ್ಷೇಪಾರ್ಹವಾದುದು. ‘ಪಶ್ಚಿಮದಲ್ಲಿ ಮತ್ತು ನಮ್ಮಲ್ಲಿ ಹೊಸ ಮಾದರಿಗಳು ಹುಟ್ಟುತ್ತಿಲ್ಲವಾದ್ದರಿಂದ ಹೆಂಗಸರು ಗಂಡಸರನ್ನು ಬಯ್ಯಲು ಪ್ರಾರಂಭಿಸಿ ಅದಕ್ಕೆ ದೌರ್ಜನ್ಯವೆಂಬ ಪದ ಉಪಯೋಗಿಸುತ್ತಿದ್ದಾರೆ... 13 ವರ್ಷದ ಮಗು ಸ್ತ್ರೀಯರ ಮೇಲೆ ದೌರ್ಜನ್ಯ ಅಂತ ನಿಂತರೆ ಹೇಗೆ?’ (ಪ್ರ.ವಾ., ನ. 2) ಎಂದು ಅವರು ಪ್ರಶ್ನಿಸಿದ್ದಾರೆ.