ಸರ್ವಜ್ಞನು, ‘ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು’ ಎಂದು ಹೇಳಿ ಶತಮಾನಗಳು ಕಳೆದವು. ಇವತ್ತು ಎಲ್ಲಾ ಕುಲಪತಿಗಳು ಕಟ್ಟಡಗಳನ್ನು ಕಟ್ಟಿಸುವ ಮೇಸ್ತ್ರಿ ಕೆಲಸವನ್ನು ಮಾಡುತ್ತಿದ್ದಾರೆ. ಸರ್ವಜ್ಞ ‘ಮೇಟಿ’ ಎಂದರೆ, ‘ಕೃಷಿ ವಿದ್ಯೆ’ ಎಂಬ ಅರ್ಥದಲ್ಲಿ ಬಳಸಿದ್ದನು. ನಮ್ಮ ಕುಲಪತಿಗಳು ಅದನ್ನು ‘ಮೇಸ್ತ್ರಿ’ ಎಂದು ಅರ್ಥ ಮಾಡಿಕೊಂಡಂತಿದೆ. ತಾವು ‘ಕುಲಪತಿ’ ಆಗುವುದಕ್ಕೆ ಕೊಟ್ಟು ಬಂದ ‘ಕೋಟಿ’ಗಳನ್ನು ಮರಳಿ ಸಂಪಾದಿಸಲು ಈ ‘ಮೇಸ್ತ್ರಿ ದಾರಿ’ಯನ್ನು ಹಿಡಿದಿದ್ದಾರೆ. ಇದರಲ್ಲಿ ಅವರದೇನು ತಪ್ಪಿದೆ? ಹಿಂದಿನ ರಾಜ್ಯಪಾಲರು ಇದಕ್ಕೆ ನಾಂದಿ ಹಾಡಿದ್ದರು, ಅದಕ್ಕೆ ದಲ್ಲಾಳಿ ಕುಲಪತಿಗಳೂ ಇದ್ದರು.