‘ಅಯೋಧ್ಯೆಯ ಮೂಲ ಹೆಸರು ‘ಸಾಕೇತ್’ ಆಗಿತ್ತು ಮತ್ತು ಅದು ಕ್ರಿಸ್ತಪೂರ್ವದಲ್ಲಿಯೇ ಒಂದು ಬೌದ್ಧ ಶಿಕ್ಷಣ ಕೇಂದ್ರವಾಗಿತ್ತು. ಕ್ರಿ.ಶ. ಒಂದನೇ ಶತಮಾನದಲ್ಲಿ ಶುಂಗ ವಂಶದ ಆಡಳಿತ ಕಾಲದಲ್ಲಿ ಸಾಕೇತ್ ಹೆಸರು ಬದಲಿಸಿ ಅಯೋಧ್ಯೆ ಮಾಡಲಾಯಿತು’ ಎನ್ನುತ್ತಾರೆ ಇತಿಹಾಸಕಾರರು. ಲಿಪಿಯೇ ಇರದಿದ್ದ ಮೌಖಿಕ ಭಾಷೆ ಮಾತ್ರ ಆಗಿದ್ದ ಸಂಸ್ಕೃತಕ್ಕೆ ದೇವನಾಗರಿ ಲಿಪಿ ಅಳವಡಿಸಿದ್ದೂ ಶುಂಗ ಅರಸರ ಕಾಲದಲ್ಲಿ ಹಾಗೂ ಸಂಸ್ಕೃತ ಭಾಷೆಯಲ್ಲಿ ರಾಮಾಯಣ, ಮಹಾಭಾರತ ಬರೆದಿದ್ದೂ ಶುಂಗರ ಕಾಲದಲ್ಲಿ. ಅದಕ್ಕೆ ಮುಂಚೆಯೇ ಚಂದ್ರಗುಪ್ತ, ಅಶೋಕ ಮುಂತಾದ ಮೌರ್ಯ ಅರಸರ ಕಾಲದಲ್ಲಿ ಭಾರತಕ್ಕೆ ಬಂದಿದ್ದ ಗ್ರೀಕ್ ಇತಿಹಾಸಕಾರರು ಸಾಕೇತ್ ನಗರದ ಹೆಸರು ಹಾಗೂ ಬ್ರಾಹ್ಮಿ ಲಿಪಿಯಲ್ಲಿದ್ದ ಪಾಲಿ ಮತ್ತು ಪ್ರಾಕೃತ ಭಾಷೆಗಳ ಬಗ್ಗೆ ಉಲ್ಲೇಖಿಸಿದ್ದಾರೆಯೇ ವಿನಾ ಸಂಸ್ಕೃತ ಭಾಷೆ ಹಾಗೂ ಅಯೋಧ್ಯೆ ನಗರದ ಬಗ್ಗೆ ಎಲ್ಲಿಯೂ ಉಲ್ಲೇಖಿಸಿಲ್ಲ. ಇದರ ಅರ್ಥ ಕ್ರಿ.ಪೂ. ಎರಡನೇ ಶತಮಾನದಲ್ಲಿ ಅಲೆಕ್ಸಾಂಡರ್ ಭಾರತಕ್ಕೆ ಬಂದಿದ್ದಾಗ ಸಾಕೇತ್ ಎಂಬ ಬೌದ್ಧ ಶಿಕ್ಷಣ ಕೇಂದ್ರ ಇತ್ತು. ಆದರೆ ಅಯೋಧ್ಯೆ ಎಂಬ ಕಾಲ್ಪನಿಕ ಪವಿತ್ರ ನಗರದ ಹೆಸರು ಮತ್ತು ಸಂಸ್ಕೃತ ಭಾಷೆ ಪ್ರಚಲಿತವಾಗಿರಲಿಲ್ಲ. ಹಾಗಿರುವಾಗ ಅಯೋಧ್ಯೆಗೆ ಮೂಲ ಹೆಸರಾದ ಸಾಕೇತ್ ಎಂದು ಮರುನಾಮಕರಣ ಮಾಡುವುದು ಉಚಿತವಲ್ಲವೇ?