ರ್ಯಾಪಿಡ್ ಇಂಟರ್ವೆನ್ಶನ್ ವೆಹಿಕಲ್ಸ್ (ಆರ್ಐವಿ) ನಿಯೋಜಿಸಲಾಗಿತ್ತು. ಇಷ್ಟೆಲ್ಲ ಬಲವಿರುವ ಪೊಲೀಸ್ ಇಲಾಖೆಗೆ, ರಮ್ಯಾ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದವರನ್ನು ಮಟ್ಟ ಹಾಕುವುದು ಹಾಗಿರಲಿ, ಕೊನೆಯ ಪಕ್ಷ ಅಂತಿಮ ದರ್ಶನಕ್ಕೆ ಬರಲಿದ್ದ ಒಬ್ಬಳು ಹೆಣ್ಣುಮಗಳಿಗೆ ರಕ್ಷಣೆ ಕೊಡಲು ಆಗುತ್ತಿರಲಿಲ್ಲವೇ? ‘ನಿಮ್ಮ ಮೇಲೆ ಹಲ್ಲೆ ನಡೆಯಬಹುದು, ಇಲ್ಲಿಗೆ ಬರಲೇಬೇಡಿ’ ಎಂದು ಮುನ್ನೆಚ್ಚರಿಕೆಯಾಗಿ ಸಲಹೆ ನೀಡಿದರೆ ಅದನ್ನು ಜಾಣತನವೆನ್ನುವುದೋ, ಅಸಹಾಯಕತೆ ಎನ್ನುವುದೋ ಅಥವಾ ಹೇಡಿತನವೆನ್ನುವುದೋ ತಿಳಿಯುತ್ತಿಲ್ಲ.