ಬೆಳಗಾವಿಯ ಸುವರ್ಣಸೌಧದ ಮುಂದೆ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದ ಕಾಲದಲ್ಲಿ ಪ್ರತಿಭಟನಕಾರರ ಆಕ್ರೋಶದ ಮಾತು ಮತ್ತು ವರ್ತನೆಗಳಿಗೆ ಮುಖ್ಯಮಂತ್ರಿ ಪ್ರತಿಕ್ರಿಯೆ ನೀಡಿದ ರೀತಿ ವಿವಾದವನ್ನೇ ಸೃಷ್ಟಿಸಿದೆ. ‘ಕಬ್ಬಿನ ನಾಲ್ಕು ವರ್ಷಗಳ ಹಿಂದಿನ ಬಾಕಿ ಹಣದ ಸಲುವಾಗಿ ಐದು ತಿಂಗಳ ಹಿಂದೆ ಬಂದ ನನ್ನನ್ನು ಗುರಿ ಮಾಡಿದ್ದು ತಪ್ಪು’ ಎಂದು ಮುಖ್ಯಮಂತ್ರಿ ವಾದಿಸುತ್ತಾರೆ.