‘ಪಡಿತರ ವಿತರಣೆ ಮಾಫಿಯಾ’ (ಒಳನೋಟ, ಪ್ರ.ವಾ., ಡಿ.9) ವರದಿಯು ನಮ್ಮ ಪಡಿತರ ವ್ಯವಸ್ಥೆಯ ಕರಾಳ ಮುಖವನ್ನು ಬಯಲು ಮಾಡಿದೆ. ಬಡತನವನ್ನೇ ಬಂಡವಾಳ ಮಾಡಿಕೊಂಡು ಕಾನೂನನ್ನೇ ವಂಚನೆಗೆ ಗುರಾಣಿಯನ್ನಾಗಿ ಬಳಸುತ್ತಿರುವ ಜಾಲದ ಕಪಿಮುಷ್ಟಿಯಲ್ಲಿ ಸಿಲುಕಿರುವ ಪಡಿತರ ವ್ಯವಸ್ಥೆ ಸರಿಪಡಿಸಲಾಗದಷ್ಟು ಗಬ್ಬೆದ್ದು ಹೋಗಿದೆ. ವಂಚಕರ ಜಾಲವು ಬಡವರ ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ನುಂಗಿ ನೀರು ಕುಡಿಯುತ್ತಿದೆ ಎಂಬುದು ಆತಂಕ ಮೂಡಿಸುತ್ತದೆ.